
ಪ್ರೀತಿ ಸ್ಮಾರಕದ ಮೇಲೆ ಪ್ರೇಮಮುದ್ರೆ ತಿರುಗಿ ಕೂತಿದೆ
March 2, 2009
ಆಗ್ರಾ ಕೋಟೆಯಿಂದ ತಾಜ್ ಮಹಲ್ ನಮ್ಮ ಕ್ಯಾಮರಾ ಕಣ್ಣುಗಳಿಗೆ ಕಂಡಿದ್ದು ಹೀಗೆ….
ಜೋಕಾಲಿಯಲ್ಲಿ ಶೋಭಕ್ಕ
ಫೆಬ್ರವರಿ 21, 2009
ಈ ಬಾರಿಯ ದಸರಾ ಉತ್ಸವದ ಸಂದರ್ಭ ತೆಗೆದ ಅಪರೂಪದ ಚಿತ್ರವಿದು.
ಆಗ ಮೈಸೂರಿನಲ್ಲಿ ಎಲ್ಲಿ ನೋಡಿದರಲ್ಲಿ ಸಚಿವೆ, ಕುಮಾರಿ ಶೋಭ ಕರಂದ್ಲಾಜೆಯವರದ್ದೇ ಕಾರುಬಾರು. ಮೈಸೂರಿನ ಮೂಲೆಮೂಲೆಯಲ್ಲೂ ಅವರ ಪೋಸ್ಟರುಗಳು ರಾರಾಜಿಸುತ್ತಿದ್ದುದು ಸುಳ್ಳಲ್ಲ.
ದಸರಾ ಉತ್ಸವದ ಸಂಪೂರ್ಣ ಉಸ್ತುವಾರಿ ಹೊತ್ತಿದ್ದ ಸಚಿವರು, ಅದೇ ಹೊತ್ತಿನಲ್ಲಿ ನಡೆದ ‘ಕಾವಾ ಮೇಳ’ದ ಉದ್ಘಾಟನೆಗೂ ಆಗಮಿಸಿದ್ದರು. ಉದ್ಘಾಟನೆಯ ಬಳಿಕ ಮೇಳವನ್ನೆಲ್ಲ ಒಂದು ಸುತ್ತು ಹಾಕುವ ವೇಳೆ ಅಲ್ಲೇ ನಿರ್ಮಿಸಲಾಗಿದ್ದ ಜೋಕಾಲಿ ಅವರ ಕಣ್ಣಿಗೆ ಬಿತ್ತು.
ಸ್ವತಃ ಜೋಕಾಲಿಯಲ್ಲಿ ಕೂತ ಶೋಭಕ್ಕ ಹಾಗೇ ಒಮ್ಮೆ ತೂಗಿದರು. ಮೊದಲ ಬಾರಿ ಶಾಸಕಿಯಾಗಿ, ಸಚಿವೆಯೂ ಆದ ಅವರಿಗೆ ಆದದ್ದೆಲ್ಲ ಕನಸೋ ನನಸೋ ಅಂತ ಅನಿಸಿರಬೇಕು. ಜೋಕಾಲಿಯಲ್ಲಿ ಕೂತ ಸಚಿವೆ ಅಲ್ಲಿಂದಲೇ ಫೋಸು ಕೊಟ್ಟರು. ನಮ್ಮ ಕ್ಯಾಮರಾ ಕಣ್ಣುಗಳಿಗೆ ಅಷ್ಟು ಸಾಕಿತ್ತು.
ಅಂತೂ, ಜೋಕಾಲಿ ಕೂಡ ಸಚಿವರಿಂದಲೇ ಉದ್ಘಾಟನೆ ಆಯ್ತು. ಚಿತ್ರದೊಳಗಿರುವ ಸಚಿವರ ಇನ್ನೊಂದು ಚಿತ್ರ ದಸರಾ ವೇಳೆ ಪೋಸ್ಟರುಗಳಲ್ಲಿ ಕಾಣಿಸಿಕೊಂಡದ್ದು.
ಇದು ಚಿತ್ರಕುಲುಮೆಯ ಎಕ್ಸ್ ಕ್ಲೂಸಿವ್ ಚಿತ್ರ!
ಕುಜರಾಹೋನಲ್ಲಿ ಕಂಡ ದೇವಸ್ಥಾನಗಳು
ಫೆಬ್ರವರಿ 21, 2009
ಮಧ್ಯಪ್ರದೇಶದ ಕುಜರಾಹೋವಿನ ಕಂದಾರಿಯಾ ಮತ್ತು ಮಹಾದೇವ ದೇವಸ್ಥಾನಗಳು ಸೂರ್ಯಾಸ್ತದ ವೇಳೆ ಕಾಣಿಸಿಕೊಂಡಿದ್ದು ಹೀಗೆ…
ಕುಪ್ಪಳ್ಳಿ ಚಿತ್ರೋತ್ಸವದ ಮೆಲುಕುಗಳು
January 6, 2009ಕುಪ್ಪಳ್ಳಿಯಲ್ಲಿ ಇದೇ ಜನವರಿ ಮೂರು ಮತ್ತು ನಾಲ್ಕರಂದು ಸಾಂಗತ್ಯ ತಂಡದ ವತಿಯಿಂದ ನಡೆದ ಚಿತ್ರೋತ್ಸವದ ಮೆಲುಕುಗಳು.






ಕಾಣಿಸಿಕೊಂಡವರು:
೧. ದೀಪಾ ಹಿರೇಗುತ್ತಿ, ಚೇತನಾ ತೀರ್ಥಹಳ್ಳಿ
೨. ಟೀನಾ
೩. ಪರಮೇಶ್ವರ ಗುರುಸ್ವಾಮಿ, ಅರವಿಂದ ನಾವಡ
೪. ಈ ಬಾರಿಯ ಟೀಮ್ ಸಾಂಗತ್ಯ
೫. ಕುಪ್ಪಳ್ಳಿಯ ಕವಿಶೈಲ
೬. ಕುಪ್ಪಳ್ಳಿಯಲ್ಲೊಂದು ಸೂರ್ಯಸ್ತ
ಹೆಚ್ಚಿನ ಸುದ್ದಿಗೆ: http://saangatya.wordpress.com/
Posted by chitrakulume 
Posted by chitrakulume
Posted by chitrakulume 



